ಕವಿಗಳು

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ
ನೇರಮಾಡಲು ಇವರು ಸೆಣಸುತ್ತಾರೆ
ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ
ಇವರ ಎದೆ ಏನೇನೋ ಹಾಡುತ್ತದೆ
ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ
ಮೊಗೆಯುತ್ತಾರೆ
ಅಸಂಖ್ಯ ಅಭಿನಯ ದೃಶ್ಯ ತರಂಗ

ಏನು ರಸತುಂಬಿ ಕಳಿಸಿರುವನೋ ಅವನು ಇವರೆದೆಯಲ್ಲಿ
ಅದು ಗಾಳಿಯಲೆಗೂ ಕಲಕಲಗೊಳ್ಳುತ್ತದೆ
ತುಮುಲಗೊಳ್ಳುತ್ತದೆ ಕೊನೆಗೆ ಕುದಿಯತೊಡಗುತ್ತದೆ
ಇವರು ಆ ಕುದಿಯನುಕ್ಕಿಸುತ್ತಾರೆ ಕಕ್ಕುತ್ತಾರೆ
ನೂರೆನೂರೆ ಬಿಸಿಬಿಸಿ ಸಿಡಿಲಂತೆ ಕೆಂಡದ ಮಳೆಯಂತೆ

ಇವರ ವೀಣೆಯ ತಂತಿ ಬಲು ಕೋಮಲ
ಇತರೆಲ್ಲ ತಂತಿಗಳು ಮಿಡಿಯದ ತಾನಗಳಲ್ಲಿ
ಇವು ಮಿಡಿಯುತ್ತವೆ ನುಡಿಯುತ್ತವೆ
ಇತರರು ಅಂದುಕೊಳ್ಳಲೂ ಆಗದುದನು
ಇವರು ಅನುಭವಿಸಿ ದನಿದೋರುತ್ತಾರೆ
ನಿಮ್ಮ ಕಟ್ಟೆಯೇರಿಗಳಿವರಿಗೆ ಸೆರೆಮನೆ

ನಿಂತ ಹೊಂಡು ನೀರೆಂದೂ ಇವರಾಗಲಾರರು
ಹನಿಹನಿ ಜಿನುಗುವ ಒರತೆಯಾದರೂ ಸರಿ
ಕ್ಷಣ ಕ್ಷಣಕೂ ಸೃಷ್ಟಿಯು ಇವರನ್ನು
ಕುಂತಲ್ಲಿ ಕುಳ್ಳಿರಿಸದೆ, ನಿಂತಲ್ಲಿ ನಿಲ್ಲಿಸದೆ, ಮಲಗಗೊಡದೆ
ಹರಿದಾಡಿಸುತ್ತದೆ ಸ್ವಚ್ಛಂಧ ನಿರ್ಝರಿಯಂತೆ
ಧಾರೆ ಧಾರೆ ಜಲಪಾತದಂತೆ, ನೆಲಮುದ್ದಿಸುವ ಮಳೆಯಂತೆ
ಇವರ ನೀರಾಳ ನಿಮ್ಮಳತೆಗೆ ಸಿಗುವುದಂತೂ ಅಲ್ಲ
ನಿಮಗಂತೂ ಇವರ ನಡೆ ಸೊಟ್ಟು, ಹೆಜ್ಜೆ ಹುಚ್ಚುಚ್ಚಾರ
ನುಡಿ ಒಗಟು, ಚರಿತ್ರೆ ವಿಚಿತ್ರ, ನೀತಿ ಅತೀತ
ಇವರ ಬಟ್ಟೆ ಕಂಡಾಬಟ್ಟೆ, ಇವರ ವರ್ತನೆ
ಅದ್ವೈತ-ಅಯೋಮಯ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಲಕ್ಕಿ
Next post ಧಾರಿಣಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys